ಬಿಜೆಪಿ ನಾಯಕರಿಂದ ವಕ್ಫ್ ವಿರುದ್ಧ ಪ್ರತಿಭಟನೆ.  ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಯತ್ನ. ವಶಕ್ಕೆ ಪಡೆದ ಪೊಲೀಸರು 

 

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

 

ಶಿವಮೊಗ್ಗ: ರಾಜ್ಯದಲ್ಲಿ ಕೆಲ ರೈತರ ಜಮೀನು ಆಸ್ತಿಗಳನ್ನು ವಕ್ಫ್ ಹೆಸರಿಗೆ ವರ್ಗಾವಣೆ ಮಾಡುಲಾಗಿರುವಂತ ಪ್ರಕರಣಗಳನ್ನು ವಿರೋಧಿಸಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗಳ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರುಗಳನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಶಾಸಕರಾದ ಎಸ್  ಎನ್. ಚೆನ್ನಬಸಪ್ಪ, ಡಿ.ಎಸ್ ಅರುಣ್,  ಎಂಎಲ್ ಸಿ  ಧನಂಜಯ ಸರ್ಜಿ, ಟಿ  ಮೇಘರಾಜ್ .  ಮಾಜಿ ಶಾಸಕ ಅಶೋಕ್, ಸುರೇಖಾ ಮುರಳೀಧರ್, ಅಣ್ಣಪ್ಪ, ಹಾಗೂ ಮುಂತಾದ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು