filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 45;

ಅಕ್ಟೋಬರ್ 7 ರಿಂದ ಈ-ಸ್ವತ್ತು ಕಡ್ಡಾಯ: ನಗರಸಭೆ ವ್ಯಾಪ್ತಿಯ ಅಸ್ತಿದಾರರಿಗೆ ಸೂಚನೆ

ಸಿಟಿ ರೌಂಡ್ಸ್  ಸಾಗರ: ನಗರಸಭೆ ವ್ಯಾಪ್ತಿಯ ಎಲ್ಲ ಅಸ್ತಿದಾರರು ಅಕ್ಟೋಬರ್ 7ರಿಂದ ತಮ್ಮ ಆಸ್ತಿಗಳನ್ನು ಈ-ಸ್ವತ್ತು ತಂತ್ರಾಂಶದಲ್ಲಿ ದಾಖಲಿಸುವುದು ಕಡ್ಡಾಯವಾಗಿದ್ದು, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಯತೀಶ್ ಆರ್. ತಿಳಿಸಿದ್ದಾರೆ.

ನಗರಸಭೆ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯ 23058 ಆಸ್ತಿಗಳಲ್ಲಿ ಕೇವಲ 7108 ಆಸ್ತಿಗಳು ಮಾತ್ರ ಈ-ಸ್ವತ್ತು ಹೊಂದಿದ್ದು, ಉಳಿದ 15ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಇನ್ನೂ ಈ-ಸ್ವತ್ತು ಮಾಡಿಸಲಾಗಿಲ್ಲ. ಈ-ಸ್ವತ್ತು ಮಾಡಿದರೆ ಆಸ್ತಿ ಖರೀದಿ, ಮಾರಾಟ, ಭೋಗ್ಯಕ್ಕೆ ಕೊಡುವುದು ಹಾಗೂ ಬ್ಯಾಂಕ್ ಸಾಲದ ಸೌಲಭ್ಯಗಳಂತಹ ವಿವಿಧ ವ್ಯವಹಾರಗಳಲ್ಲಿ ಸುಗಮತೆ ದೊರಕುತ್ತದೆ.

ಈ ಸಂಬಂಧ, ದಸರಾ ಹಬ್ಬದ ನಂತರ ಪ್ರತಿ ವಾರ್ಡ್ನಲ್ಲಿ ಸಭೆಗಳನ್ನು ಆಯೋಜಿಸಿ, ಸ್ಥಳದಲ್ಲಿಯೇ ಅರ್ಜಿಗಳನ್ನು ಸ್ವೀಕರಿಸುವ ಮೂಲಕ ಈ-ಸ್ವತ್ತು ಪ್ರಕ್ರಿಯೆ ತ್ವರಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

You may have missed