ರೌಡಿಶೀಟರ್ ಗುಂಡನ ಕಾಲಿಗೆ ಗುಂಡೇಟು..!

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ. ಎಂ

 

ಭದ್ರಾವತಿ: 21-02-2025, ಭದ್ರಾವತಿ ನಿವಾಸಿ ಆದ ರೌಡಿಶೀಟರ್ ಗುಂಡ ಅಲಿಯಾಸ್ ರವಿ ಎಂಬ ಅಪರಾಧಿಯನ್ನು ಭದ್ರಾವತಿ ನಗರದಲ್ಲಿ   ಪ್ರಕರಣದ ವಿಚಾರವಾಗಿ ಬಂಧಿಸಲು ಹೋದಾಗ ಪೊಲೀಸ್ ಸಿಬ್ಬಂದಿಯ ಮೇಲೆ ಅಪರಾಧಿ ಗುಂಡ ಅಲಿಯಾಸ್ ರವಿ ಹಲ್ಲೆ ಮಾಡಲು ಮುಂದಾದಾಗ, ಆತ್ಮ ರಕ್ಷಣೆಗಾಗಿ ಪೊಲೀಸ್ ಅಧಿಕಾರಿ ಕೃಷ್ಣ ಎಂಬವರು. ಅಪರಾಧಿ ಗುಂಡ ಅಲಿಯಾಸ್ ರವಿ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಅಪರಾಧಿ ಗುಂಡ ಅಲಿಯಾಸ್ ರವಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುಂಡ ಅಲಿಯಾಸ್ ರವಿ ಎಂಬಾತನು ನಾಲ್ಕು ಪ್ರಕರಣದಲ್ಲಿ ಕಾನೂನಿಗೆ ಬೇಕಾದಂತಹ ಅಪರಾಧಿಯಾಗಿದ್ದು . ಇವನನ್ನು ಬಂಧಿಸುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.