ಕರ್ನಾಟಕ ರಾಜ್ಯಕ್ಕೆ 11 ನೇ ಸ್ಥಾನ ಪಡೆದ ನಿಹಾರಿಕಾ ಎಸ್. ಕೆ.

 

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ ಎಂ

 

ಶಿವಮೊಗ್ಗ: SSLC ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ 11 ನೇ ಸ್ಥಾನ ಪಡೆದುಕೊಂಡಿರುವ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿಯಾಗಿದ್ದು ಶಾಲೆಗೆ ಕೀರ್ತಿತಂದಿರುತ್ತಾರೆ.

ವಿದ್ಯಾರ್ಥಿನಿನಿಹಾರಿಕಾ ಎಸ್. ಕೆ, ನಗರದ ಶ್ರೀ ವಜ್ರೇಶ್ವರಿ ವಿನಾಯಕ ಸೇವಾ ಟ್ರಸ್ಟ್ (ರೀ)ನ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಶ್ರೀ ಕೇಶವಮೂರ್ತಿ ಇವರ ಸುಪುತ್ರಿಯಾಗಿದ್ದು,ನಿಹಾರಿಕಾ ಎಸ್. ಕೆ. ಇವರ ಈ ಸಾಧನೆಗಾಗಿ, ಶ್ರೀ ವಜ್ರೇಶ್ವರಿ ವಿನಾಯಕ ಸೇವಾ ಟ್ರಸ್ಟ್ (ರೀ) ವತಿಯಿಂದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ವತಿಯಿಂದ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.