ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ದಿನಾಂಕ: 07-03-2025
ಶಿವಮೊಗ್ಗ: ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮನೆಗಳ್ಳತನ ಪ್ರಕರಣಗಳಲ್ಲಿ, ಪ್ರಕರಣದ ಆರೋಪಿಗಳಾದ 1)ಅಶೋಕ ಕೆ, 42 ವರ್ಷ, ವ್ಯವಸಾಯ ಕೆಲಸ, ಬಸವಾಪುರ ಗ್ರಾಮ, ಹಾರೋಹಿತ್ಲು ಹೊಸನಗರ, 2) ಚಂದ್ರ @ ಚಂದ್ರಹಾಸ, 33 ವರ್ಷ, ಚಿನ್ನಬೆಳ್ಳಿ ತಯಾರಿಕಾ ಕೆಲಸ, ಹಾರ್ನಳ್ಳಿ ಗ್ರಾಮ, ಶಿವಮೊಗ್ಗ ಇವರುಗಳನ್ನು ಬಂಧಿಸಿ, ಆರೋಪಿತರನ್ನು ವಿಚಾರಣೆಗೆ ಓಳಪಡಿಸಿದಾಗ ಆರೋಪಿ ಅಶೋಕ ಕೆ ಈತನು ತಾನು ಕಳ್ಳತನ ಮಾಡಿದ ಬೆಳ್ಳಿ ಹಾಗೂ ಬಂಗಾರದ ಆಭರಣಗಳಲ್ಲಿ ಕೆಲವು ಆಭರಣಗಳನ್ನು ಆರೋಪಿ ಚಂದ್ರ @ ಚಂದ್ರಹಾಸ ಈತನಿಗೆ ಮಾರಾಟ ಮಾಡಿದ್ದು, ಬಾಕಿ ಉಳಿದ ಆಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನ ಇಟ್ಟಿರುವುದಿಗಿ ತಿಳಿಸಿರುತ್ತಾನೆ. ಸರಣಿ ಮನೆ ಕಳ್ಳತನವೂ ಆನಂದಪುರ ಪೊಲೀಸ್ ಠಾಣೆಯ 4, ಸಾಗರ ಪೇಟೆ ಪೊಲೀಸ್ ಠಾಣೆಯ 1, ರಿಪ್ಪನ್ಪೇಟೆ ಪೊಲೀಸ್ ಠಾಣೆಯ 5, ಹೊಸನಗರ ಪೊಲೀಸ್ ಠಾಣೆಯ 1 ಮತ್ತು ಮಾಳೂರು ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು 12 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 30,96,000/- ರೂಗಳ 387 ಗ್ರಾಂ ಚಿನ್ನದ ಆಭರಣ, ಅಂದಾಜು ಮೌಲ್ಯ 27,688/- ರೂಗಳ 384 ಗ್ರಾಂ ಬೆಳ್ಳಿ ಆಭರಣ ಹಾಗೂ ಅಂದಾಜು ಮೌಲ್ಯ 1,00,000/- ರೂ ಗಳ ಕೃತ್ಯಕ್ಕೆ ಬಳಸಿದ 2 ಬೈಕ್ ಗಳು ಸೇರಿ ಒಟ್ಟು 32,23,688/- ರೂಗಳ ಮಾಲನ್ನು ಹೊಸನಗರ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸರಣಿ ಮನೆ ಕಳ್ಳತನ ಆರೋಪಿಗಳನ್ನು ಹಾಗೂ ಕದ್ದಂತಹ ಬಂಗಾರದ ಇನ್ನಿತರ ಆಭರಣಗಳನ್ನು ಪತ್ತೆಗಾಗಿ ಶಿವಮೊಗ್ಗ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ. ಕೆ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ. ಕಾರಿಯಪ್ಪ ಎ. ಜಿ. ರವರ ಮಾರ್ಗದರ್ಶನದಲ್ಲಿ ಗೋಪಾಲಕೃಷ್ಣ ಟಿ ನಾಯ್ಕ ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ, ಶ್ರೀ ಸಂತೋಷ್ ಶೆಟ್ಟಿ, ಸಿಪಿಐ, ಸಾಗರ ಗ್ರಾಮಾಂತರ ವೃತ್ತ ರವರ ನೇತೃತ್ವದಲ್ಲಿ ಯುವರಾಜ. ಕೆ ಪಿಎಸ್ಐ ಆನಂದಪುರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ ಅಶೋಕ್, ಪರಶುರಾಮ, ಸಿಪಿಸಿ ಉಮೇಶ್ ಲಮಾಣಿ, ಸಂತೋಷಕುಮಾರ, ನೂತನ್, ನಿರಂಜನ್, ಸುಬ್ರಮಣ್ಯ.ಎಸ್, ಭರತ್ ಕುಮಾರ್ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ಇಂದ್ರೇಶ್, ವಿಜಯ್ ಕುಮಾರ್, ಮತ್ತು ಚಾಲಕರಾದ ಎ.ಆರ್.ಎಸ್.ಐ ನರಸಿಂಹಸ್ವಾಮಿ ಮತ್ತು ಎ.ಹೆಚ್.ಸಿ ಸತೀಶ್ ರವರುಗಳನ್ನು ಒಳಗೊಂಡ ವಿಶೇಷ ತನಿಖಾತಂಡವನ್ನು ರಚಿಸಲಾಗಿದ್ದು. ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ ಎಂದು ತಿಳಿಸಿದ್ದಾರೆ.
More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!