ಜಗದ್ಗುರು ಶ್ರೀ ಶ್ರೀ ಶ್ರೀ ಡಾ||ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ 26ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಮತ್ತು ರಾಷ್ಟ್ರೀಯ ಭಗೀರಥ ಜಯಂತೋತ್ಸವ..!

 

ಶಿವಮೊಗ್ಗ:ಸಿಟಿ ರೌಂಡ್ಸ್ ನ್ಯೂಸ್ 
ಅಣ್ಣಪ್ಪ.ಎಂ

ಶಿವಮೊಗ್ಗ: ಹೊಸದುರ್ಗತಾಲೂಕಿನ ಬ್ರಹ್ಮ ವಿದ್ಯಾನಗರದ ಸುಕ್ಷೇತ್ರ ಶ್ರೀಮದ್ ಜಗದ್ಗುರು ಚಿನ್ಮುಲಾದ್ರಿ ಶಿಲಾಪುರಿ ಸೂರ್ಯ ಸಿಂಹಾಸನ ಭಗೀರಥ ಗುರುಪೀಠದ ಶ್ರೀ ಭಗೀರಥ ಉಪ್ಪಾರ ಸಮಾಜದ ಭಗೀರಥ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳವರ 26ನೇ ವರ್ಷದ ಪಟ್ಟಾಭಿಷೇಕ ಕಾರ್ಯಕ್ರಮವನ್ನು ದಿನಾಂಕ 10 -02- 2025 ರಂದು ಚಿತ್ರದುರ್ಗ ಜಿಲ್ಲೆಯ ಮಧುರೆ ಅಂಚೆ ಹೊಸದುರ್ಗ ತಾಲ್ಲೂಕು, ಬ್ರಹ್ಮ ವಿದ್ಯಾನಗರ ಸುಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ರಾಷ್ಟ್ರೀಯ ಭಗೀರಥ ಉಪ್ಪಾರ ಸಮಾಜದ ಬಾಂಧವರೆಲ್ಲರೂ. ಪ್ರತಿ ಮನೆಗೆ ಒಬ್ಬರಂತೆ ಪಟ್ಟಾಭಿಷೇಕದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಮಹಾ ಸ್ವಾಮೀಜಿಗಳ ಆಶೀರ್ವಚನಗಳನ್ನು ಪಡೆದು ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಧನ್ಯರಾಗುವ ಮೂಲಕ. ಉಪ್ಪಾರ ಸಮಾಜದ ಏಳಿಗೆಗಾಗಿ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಹಾಸ್ವಾಮೀಜಿಗಳ ಮಾರ್ಗದರ್ಶನದ ಮೇರೆಗೆ, ಉಪ್ಪಾರ ಸಮಾಜದ ಏಳಿಗೆಗೆ ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ಮಹಾಸ್ವಾಮೀಜಿಗಳ 26ನೇ ಪಟ್ಟಾಭಿಷೇಕಕ್ಕೆ ಆಗಮಿಸುವಂತೆ. ರಾಷ್ಟ್ರೀಯ ಭಗೀರಥ ಉಪ್ಪಾರ ಸಮಾಜದ ಕುಲಬಾಂಧವರಿಗೆ ಕಾರ್ಯಕ್ರಮಕ್ಕೆ ಸ್ವಾಗತಿಸುವ ಮೂಲಕ ಮಹಾಸ್ವಾಮೀಜಿಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ವಿನಂತಿ.

ಮಹಾಸ್ವಾಮೀಜಿಗಳ ಪಟ್ಟಾಭಿಷೇಕದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವಂತ ರಾಷ್ಟ್ರೀಯ ಭಗೀರಥ ಉಪ್ಪಾರ ಸಮಾಜದ ಕುಲಬಾಂಧವರಿಗೆ ಹೃದಯಪೂರ್ವಕ ಸ್ವಾಗತ ಕೋರುತ್ತಿರುವವರು.

                    ಕೆ ದೇವೇಂದ್ರಪ್ಪ

        ಶಿವಮೊಗ್ಗ ಜಿಲ್ಲಾ ಉಪ್ಪಾರ ಸಮಾಜದ ಪ್ರಧಾನ ಕಾರ್ಯದರ್ಶಿ.

         ಸಂಯೋಜಕರು ಕೆಪಿಸಿಸಿ ಶಿವಮೊಗ್ಗ.

 

                   ಶ್ರೀ ಅಣ್ಣಪ್ಪ.ಎಂ

                           ಜಿಲ್ಲಾ ಅಧ್ಯಕ್ಷರು 

                            ಭಗೀರಥ ಉಪ್ಪಾರ 

                      ಯುವ ವೇದಿಕೆ, ಶಿವಮೊಗ್ಗ

        ಸಿಟಿ ರೌಂಡ್ಸ್ ಪತ್ರಿಕೆಯ ಸಂಪಾದಕರು-ಪ್ರಕಾಶಕರು

        ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ 

             ಶಿವಮೊಗ್ಗ ಜಿಲ್ಲಾ  ಸಂಘಟನಾ ಕಾರ್ಯದರ್ಶಿ